ಸಂಕ್ರಾಂತಿ ಕಾವ್ಯ ಸುಗ್ಗಿ ಉನ್ನತಿಯ ಕಡೆಗೆ…. ಚಂದಕಚರ್ಲ ರಮೇಶ್ ಬಾಬು ಹೊಸವರ್ಷದ ಈ ವಾರಉತ್ಥಾನದ ಕರೆಯ ವಾರ ಏಳಿ ಎದ್ದೇಳಿಗುರಿ ಮುಟ್ಟುವ ವರೆಗೆ ನಿಲ್ಲದಿರಿಎನ್ನುತ್ತ ಎಲ್ಲರಿಗುಉತ್ತೇಜನ ಕೊಟ್ಟಸಂತನೊಬ್ಬನ ಹುಟ್ಟು ದಿನ ತನ್ನ ತಳದ ಪಯಣವನ್ನು ಮುಗಿಸಿಊರ್ಧ್ವದ ಕಡೆಗೆ ನಡೆಯುತ್ತಪ್ರಗತಿಯ ದಿಸೆಯಲ್ಲಿಪಾಠ ಹೇಳುವಉತ್ತರಾಯಣದ ಸೂರ್ಯನ ಹಬ್ಬ ತನ್ನ ದಾರದ ಬೇರುಕೆಳಗಿದ್ದರೇನುತಾನು ಗಗನಕ್ಕೇರಿನಭದ ನಗರಿಯಲ್ಲಿನಗಾರೆ ಹೊಡೆಯುತ್ತಎತ್ತರಕ್ಕೇರುವ ಸಂದೇಶವೀಯುವಪತಂಗುಗಳ ಪರ್ವ ಎಲ್ಲೆಲ್ಲೂ ಹರಡುತ್ತಎಲ್ಲರನ್ನೂ ನಡುಗಿಸಿದಮಹ ಮಾರಿಯನ್ನುಮಣಿಸುವ ಲಸಿಕೆಯ ಭರವಸೆಶುರುವಾಗುವ ಶುಭದಿನ